ಖ್ಯಾತ ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆಯುವುದರೊಂದಿಗೆ ನಿರ್ದೇಶನವನ್ನು ಮಾಡಿರುವ ‘ನೂರುಜನ್ಮಕು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಂತೋಷ್ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಐಂದ್ರಿತಾ ರೇ. ಆದರ್ಶಬಾಲಕೃಷ್ಣ, ಭವ್ಯ, ಶರಣ್, ಕರಿಬಸವಯ್ಯ, ಮಂಡ್ಯರಮೇಶ್, ವೀಣಾಭಟ್, ಬ್ಯಾಂಕ್ಜನಾರ್ದನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ನೀಡಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ವಿನಯ್ಲಾಡ್ ನಿರ್ಮಿಸಿರುವ ಈ ಚಿತ್ರ ಶೇಕಡಾ ೪೦ ಭಾಗ ಹೊರದೇಶದಲ್ಲೇ ಚಿತ್ರೀಕರಣಗೊಂಡಿದೆ. ಬಸವರಾಜ ಅರಸು ಸಂಕಲನ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಶಿವಾನಂದ ಸೋಮಪ್ಪ ಸಹನಿರ್ದೆಶನ ಈ ಚಿತ್ರಕ್ಕಿದೆ.